Saturday, 6 September 2014




ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರೊಂದಿಗೆ ಅಬ್ಬಕ್ಕ ಇತಿಹಾಸ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು.

Sunday, 31 August 2014


                                             

                                                           68ನೆಯ ಸ್ವಾತಂತ್ರ್ಯ ದಿನಾಚರಣೆ

 

                                  ದಿನಾಂಕ ೧೫ ಆಗಸ್ಟ ೨೦೧೪ ರಂದು ೬೮ನೆಯ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಅಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಶಾಲಾ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ವ ಶಿಕ್ಷಕವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ರಾವ್ ಇವರು ಧ್ವಜಾರೋಹಣ ಮಾಡಿದರು.ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುನಿತಾ ನಾಯಕ್ ಸಹಕರಿಸಿದರು.

                        ತದನಂತರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಚಿಕ್ಕ ಸಮಾರಂಭ ಏರ್ಪಡಿಸಲಾಗಿತ್ತು. ನಲ್ಲೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸುಮತಿ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ದಿವಾಕರ ಶೆಟ್ಟಿ, ಮಾಜಿ ಸೈನಿಕರಾದ ಶ್ರೀ ಶೀನ ಶೆಟ್ಟಿ, ದಾನಿ ಗೋಪಶೆಟ್ಟಿ, S.D.M.C. ಆಧ್ಯಕ್ಷರಾದ ಶ್ರೀ ಗಣೇಶ ರಾವ್ ,ಹಾಗೂ ಸದಸ್ಯರು, ಧರ್ಮಸ್ಥಳ ಸ್ವಸಹಾಯ ಸಂಘದ ಪದಾದಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ನಲ್ಲೂರು ಇವರು ಕೊಡಮಾಡಿದ ಊಟದ ತಟ್ಟೆಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಕಲಾ ಶಿಕ್ಷಕರಾದ ಶ್ರೀ ಪ್ರಶಾಂತ ಜತ್ತನ್ನ, ವಿಧ್ಯಾರ್ಥಿಗಳಾದ ಕುಮಾರಿ ಪೂಜಾಶ್ರೀ, ಕುಮಾರಿ ದೀಕ್ಷಿತಾ, ಕುಮಾರಿ ದೀಪಿಕಾ, ಕುಮರಿ ಶಬರಿ ಸ್ವಾತಂತ್ರ್ಯ ಕುರಿತು ಮಾತ ನಾಡಿದರು. ಶ್ರೀ ಸುರೇಂ ದ್ರ ವಂದಿಸಿದರು. ಶ್ರೀ ಕೃಷ್ಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.









Saturday, 30 August 2014

            

                  ವಿಶ್ವ ಜನಸಂಖ್ಯಾ ದಿನಾಚರಣೆ 

                      




          ಸರಕಾರಿ ಪ್ರೌಢಶಾಲೆ ನಲ್ಲೂರು ಇಲ್ಲಿ ಜನಸಂಖ್ಯಾ ದಿನಾಚರಣೆಯನ್ನು ರಾಣಿ ಅಬ್ಬಕ್ಕ ಇತಿಹಾಸಸಂಘ ಹಾಗೂ ನೇತಾಜಿ ಸೇವಾದಳದಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಪ್ರಯುಕ್ತ "ಜನಗಣತಿ ೨೦೧೧" ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹತ್ತನೇ ತರಗತಿಯ ಕುಮಾರಿ ಪೂಜಾಶ್ರೀ ವಿಜೇತರಾದರು. ಜನಗಣತಿ ಆಯುಕ್ತಾಲಯದಿಂದ ಕಳುಹಿಸಲ್ಪಟ್ಟಿದ್ದ ಪ್ರಶಸ್ತಿಪತ್ರವನ್ನು ಶಾಲೆಯ ಮುಖ್ಯಗುರುಗಳು ವಿತರಿಸಿದರು.





Friday, 29 August 2014





                                   ರಾಣಿ ಅಬ್ಬಕ್ಕ ಇತಿಹಾಸ ಸಂಘ
                                 
                        
                                       ವಾರದ ರಸಪ್ರಶ್ನೆ ಕಾರ್ಯಕ್ರಮ



ವಿಷಯ: ಪ್ರಚಲಿತ ಘಟನೆಗಳು ಹಾಗೂ ಕ್ರೀಡೆ

ತಂಡಗಳು
ಸುತ್ತು ೧
ಸುತ್ತು ೨
ಸುತ್ತು ೩
ಸುತ್ತು ೪
ಒಟ್ಟು
ಭಗತ್ ಸಿಂಗ್
0
10
0
10
20
ಗಾಂಧೀಜಿ
5,5
0
0
10
20
ನೆಹರು
5,10
10
5
5,10,10
55
ರಾಣಿ ಚೆನ್ನಮ್ಮ
10
10
10,5
10
45
ತಿಲಕ್
0
10
10
0
20

ವಿಜೇತ ತಂಡ:
   ಪ್ರಥಮ:  
                      ನೆಹರು ತಂಡ ;      
                                                       ಮನ್ವಿತ್, ಪ್ರಚಿತಾ, ವಿಜೇಶ್

 
  ದ್ವಿತೀಯಾ :  
                       ಚೆನ್ನಮ್ಮ ತಂಡ:  
                                                     ಪೂಜಾಶ್ರೀ, ಆಯುಷಾ, ಮಂಜುನಾಥ್ 

 





                                                  ಶಾಲಾ ಸಂಸತ್ತಿನ ಉದ್ಘಾಟನೆ ಹಾಗೂ ಮಂತ್ರಿಗಳಿಗೆ ಪ್ರಮಾಣವಚನ
             

                                     ದಿನಾಂಕ 14-06-2014ರಂದು ಶಾಲಾ ಸಂಸತ್ತಿನ ಉದ್ಘಾಟನೆ ಹಾಗೂ ಮಂತ್ರಿಗಳಿಗೆ ಪ್ರಮಾಣವಚನ ಬೋಧನೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಸಹಶಿಕ್ಷಕರಾದ ಶ್ರೀ ಸುರೇಂದ್ರ ಇವರು ಮಂತ್ರಿಮಂಡಲದ ಪ್ರತಿನಿಧಿಗಳಿಗೆ ಪ್ರಮಾಣ ವಹನ ಬೋಧಿಸಿದರು.







                2014-15ನೇ ಸಾಲಿನ ಶಾಲಾ ಸಂಸತ್ತಿನ ರಚನೆ.
 

                                    ಮಕ್ಕಳಲ್ಲಿ ನಾಯಕತ್ವ, ಸಹಕಾರ ಹಾಗೂ ಸಾಮಾಜಿಕ ಮೌಲ್ಯವನ್ನು ಬೆಳೆಸುವುದಕ್ಕಾಗಿ 2014-15 ನೇ ಶಾಲಾ ಸಂಸತ್ತನ್ನು ರಚಿಸಲಾಯಿತು. ಲೋಕಸಭಾ ಚುನಾವಣಾ ಮಾದರಿಯಲ್ಲಿ ವಿವಿಧ ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಸುವುದರ ಮೂಲಕ ಶಾಲಾ ಸಂಸತ್ತನ್ನು ರಚಿಸಿ ಉದ್ಘಾಟಿಸಲಾಯಿತು.

. ಚುನಾವಣಾ ದಿನಾಂಕ ಘೋಷಣೆ:
       ದಿನಾಂಕ ೦೫-೦೬-೨೦೧೪ ರಂದು ಶಾಲಾ ಮುಖ್ಯೋಪಾಧ್ಯಾಯರು ೨೦೧೪-೧೫ನೇ ಸಾಲಿನ ಶಾಲಾ ಸಂಸತ್ತಿಗಾಗಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದರು.

. ನಾಮಪತ್ರ ಸಲ್ಲಿಕೆ:
      ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಲು ದಿನಾಂಕ ೦೭-೦೬-೨೦೧೪ ಕಡೆಯ ದಿನಾಂಕವಾಗಿತ್ತು.13 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

. ನಾಮಪತ್ರ ಪರಿಶಿಲನೆ:
       ದಿನಾಂಕ 09-06-2014 ರಂದು ಅಭ್ಯರ್ಥಿಗಳ ನಾಮಪತ್ರ ಪರಶೀಲಿಸಲಾಯಿತು. ಒಬ್ಬರೇ ಸ್ಪರ್ಧಿಸಿದ ಮಂತ್ರಿ ಸ್ಥಾನವನ್ನು ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.

. ನಾಮಪತ್ರ ಹಿಂದೆಗೆತ:
       ದಿನಾಂಕ 10-06-2014ರಂದು ಸ್ಪರ್ಧಿಸಲು ಇಚ್ಚೆ ಇಲ್ಲದ ಸ್ಪರ್ಧಿಗಳು ತಮ್ಮ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಯಾರೂ ನಾಮಪತ್ರ ಹಿಂತೆಗೆದು ಕೊಳ್ಳಲಿಲ್ಲ. ಅಂತಿಮವಾಗಿ ಐದು ಮಂತ್ರಿ ಸ್ಥಾನಕ್ಕೆ ಹತ್ತು ಜನ ಸ್ಪರ್ಧಿಗಳು ಕಣದಲ್ಲಿ ಉಳಿದರು.

. ಚುನಾವಣಾ ಪ್ರಚಾರ:
     ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ತಮ್ಮ ಪರವಾಗಿ ಮತ ನೀಡುವಂತೆ ಕೇಳೀ ಕೊಳ್ಳಲು ಅವಕಾಶ ನೀಡಲಾಯಿತು.

. ಚುನಾವಣೆ:

           ದಿನಾಂಕ 12-06-2014ರಂದು ಶಾಲಾ ಸಂಸತ್ತಿಗಾಗಿ ಚುನಾವಣೆ ನಡೆಸಲಾಯಿತು. ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತ ಇವರು ಮತಗಟ್ಟೆ ಅಧ್ಯಕ್ಷರಾಗಿ ,ಶ್ರೀ ಕೃಷ್ಣ ದೇವಾಡಿಗ, ಶ್ರೀ ಸುರೇಂದ್ರ, ಶ್ರೀ ವೀರೆಶ್ ಪಾತಾಳಿ ಇವರು ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಅಳಿಸಲಾಗದ ಶಾಯಿ, ಮಾದರಿ ಮತಪತ್ರ ಹಾಗೂ ಮತಪೆಟ್ಟಿಗೆಯನ್ನು ಚುನಾವಣೆಗೆ ಬಳಸಲಾಯಿತು. ಪ್ರತಿ ತರಗತಿಯ ಮತದಾರರೂ ಚುನಾವಣೆಯಲ್ಲಿ ಮತದಾನ ಮಾಡಿದರು.


. ಫಲಿತಾಂಶ ಘೋಷಣೆ:
          ದಿನಾಂಕ 13-06-2014ರಂದು ಅಭ್ಯರ್ಥಿಗಳು ಹಾಗೂ ಮತದಾರರ ಮುಂದೆ ಭದ್ರತೆಯಲ್ಲಿದ್ದ ಮತಪೆಟ್ಟಿಗೆಯನ್ನು ತೆರೆದು ಮತ ಎಣಿಕೆ ಮಾಡಲಾಯಿತು. ಶ್ರೀಮತಿ ಸುನಿತಾ ಹಾಗೂ ಶ್ರೀಮತಿ ಸುಜಾತ ಇವರು ಮತ ಎಣಿಕೆ ಕಾರ್ಯನಿರ್ವಹಿಸಿದರು.





ಚುನಾವಣೆಯಲ್ಲಿ ಆಯ್ಕೆಯಾದ ಮಂತ್ರಿಗಳು

. ಮುಖ್ಯ ಮಂತ್ರಿ :
                        ಕುಮಾರಿ ಪೂಜಾಶ್ರೀ
                      ಅವಿರೋಧ ಆಯ್ಕೆ

. ಗೃಹ ಮಂತ್ರಿ :
                    ಕುಮಾರ್ ಮನ್ವಿತ್ ಶೆಟ್ಟಿ
                      ಅವಿರೋಧ ಆಯ್ಕೆ

. ವಾರ್ತಾ ಮಂತ್ರಿ :
                       ಕುಮಾರಿ ಆಯುಷಾ
                     ಅವಿರೋಧ ಆಯ್ಕೆ

. ಸಂಸ್ಕೃತಿಕ ಮಂತ್ರಿ :
                        ಕುಮಾರಿ ಅಕ್ಷತಾ
                          ಕುಮಾರ್ ವಿನುತ್ ವಿರುದ್ಧ ೯ ಮತಗಳ ಅಂತರದ ಜಯ

. ಕ್ರೀಡಾ ಮಂತ್ರಿ:
                       ಕುಮಾರಿ ರೇಷ್ಮಾಬಾನು
                       ಕುಮಾರ ಚೇತನ್ ನಾಯಕ್ ವಿರುದ್ಧ ೨೧ ಮತಗಳ ಅಂತರದ ಜಯ

. ಆಹಾರ ಮಂತ್ರಿ :
                      ಕುಮಾರ ಸುಭಿತ್ ಪೂಜಾರಿ
                     ಕುಮಾರಿ ನಿರೀಕ್ಷಾ ವಿರುದ್ಧ ೩೧ ಮತಗಳ ಅಂತರದ ಜಯ

. ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ :
                    ಕುಮಾರ ವಿಜೇಶ್
                     ಕುಮಾರಿ ದೀಕ್ಷಿತಾ ವಿರುದ್ಧ ೫ ಮತಗಳ ಅಂತರದ ಗೆಲುವು.

. ನೀರಾವರಿ ಮತ್ತು ತೋಟಗಾರಿಕಾ ಮಂತ್ರಿ:
                          ಕುಮಾರ ಪ್ರತಾಪ್
                          ಕುಮಾರ ರಾಜೇಂದ್ರ ವಿರುದ್ಧ ೭೫ ಮತಗಳ ಅಂತರದ ಭರ್ಜರಿ ಗೆಲುವು.











2014-15ನೇ ಸಾಲಿಗಾಗಿ
ರಾಣಿ ಅಬ್ಬಕ್ಕ ಇತಿಹಾಸ ಸಂಘದ ಉದ್ಘಾಟನಾ ಕಾರ್ಯಕ್ರಮ

  
 
                      ದಿನಾಂಕ 14/06/2014 ರಂದು 2014-15 ನೇ ಸಾಲಿಗಾಗಿ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯರಾದ ಶ್ರಿ ಮಹಾಬಲ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮುಖ್ಯೋಪಾದ್ಯಾಯರಾದ ಶ್ರೀ ಭಾಸ್ಕರ ಟಿ. ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ಸುನಿತಾ ನಾಯಕ್ ಉಪಸ್ಥಿತರಿದ್ದರು. ಕುಮಾರಿ ಸವಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
                       ಸಹಶಿಕ್ಷಕರಾದ ಶ್ರೀ ಕೃಷ್ಣ ದೇವಾಡಿಗ ಸರ್ವರನ್ನು ಸ್ವಾಗತಿಸಿದರು. ಶ್ರಿ ಮಹಾಬಲ ಶೆಟ್ಟಿ ಇವರು ದೀಪ ಬೇಳಗಿಸುವುದರ ಮೂಲಕ ಸಂಘಗಳ ಚಟುವಟಿಕೆಗೆ ಚಾಲನೆ ನೀಡಿದರು. ಅತಿಥಿಗಳು ಅವರಿಗೆ ಸಹಕರಿಸಿದರು. ಸಹಶಿಕ್ಷಕರಾದ ಶ್ರೀ ಪ್ರಶಾಂತ ಜತ್ತನ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ರಚನೆ,ಉದ್ದೇಶ ಹಾಗೂ ಕಾರ್ಯಗಳನ್ನು ವಿವರಿಸಿದರು. ಸಹಶಿಕ್ಷಕರಾದ ಶ್ರೀ ಸುರೇಂದ್ರ ಇವರು ಶಾಲಾ ಸಂಸತ್ತಿನ ಸದಸ್ಯರಿಗೆ ಹಾಗೂ ವಿವಿಧ ಸಂಘಗಳ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ರಾಣಿ ಅಬ್ಬಕ್ಕ ಇತಿಹಾಸ ಸಂಘದ ಅಧ್ಯಕ್ಷೆ ಕುಮಾರಿ ಸುಶ್ಮಿತಾ ಪ್ರಮಾಣವಚನ ಸ್ವೀಕರಿಸಿದರು.ಮುಖ್ಯಗುರುಗಳಾದ ಶ್ರೀ ಭಾಸ್ಕರ್ ಟಿ. ಇವರು ಸಂಘಗಳ ಅಗತ್ಯತೆ, ಶಾಲಾ ಸಂಸತ್ತಿನ ಮಹತ್ವ ವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಗಣೇಶ್ ರಾವ್ ಶುಭಹಾರೈಸಿದರು. ಹಿರಿಯ ಸಹಶಿಕ್ಷಕಿ ಶ್ರೀಮತಿ ಸುನಿತಾ ನಾಯಕ್ ವಂದಿಸಿದರು. ಕುಮಾರಿ ಪೂಜಾಶ್ರೀ ವಂದಿಸಿದರು.












 

 





                                                                                   2014-15ನೇ ಸಾಲಿನ ಪದಾಧಿಕಾರಿಗಳು


ಗೌರವ ಅಧ್ಯಕ್ಷರು :
                                                                    ಶ್ರೀಮತಿ ಸುನಿತಾ ನಾಯಕ್
                                   ಪ್ರಭಾರ ಮುಖ್ಯಗುರುಗಳು

ಮಾರ್ಗದರ್ಶಕರು:
                                     ಶ್ರೀ ಪ್ರಶಾಂತ ಜತ್ತನ್
                                ಸಮಾಜವಿಜ್ಞಾನ ಶಿಕ್ಷಕರು.

ಆಧ್ಯಕ್ಷರು :  
                                                  ಕುಮಾರಿ ಸುಶ್ಮಿತಾ

ಉಪಾಧ್ಯಕ್ಷರು :  
                                          ಕುಮಾರಿ ಪೂಜಾ

ಕಾರ್ಯದರ್ಶಿ :  
                                                    ಕುಮಾರ ಸುನಿಲ್ ಎಸ್.

ಜತೆ ಕಾರ್ಯದರ್ಶಿ:
                               ಕುಮಾರಿ ಪ್ರಚಿತಾ

ಸದಸ್ಯರುಗಳು:  
                                         ಕು. ಮನ್ವಿತ್ ಶೆಟ್ಟಿ
                    ಕು. ಅಕ್ಷಯ್
                    ಕು. ಸುದರ್ಶನ್
                    ಕು. ಪವನ್
                   ಕು. ರಶ್ಮಿತಾ
                   ಕು. ಎನ್. ಅರುಣಾ
                   ಕು. ಅನುಷಾ
                  ಕು. ಪೂರ್ಣಿಮಾ
                  ಕು. ಅಂಬಿಕಾ
                  ಕು. ನಾಗಶ್ರೀ
                 ಕು. ಸಂಗೀತಾ
                ಕು. ಸುಶ್ಮಿತಾ
                ಕು . ಪ್ರಜ್ಞಾ
               ಕು. ಪ್ರಮೀಶಾ


Tuesday, 13 May 2014

2014 April SSLC ಶಾಲಾ ಫಲಿತಾಂಶ


    ಒಟ್ಟು ವಿಧ್ಯಾರ್ಥಿಗಳು :-   20
       
         ವಿಶಿಷ್ಟ ಶ್ರೇಣಿ :-  2
         
          ಪ್ರಥಮ ದರ್ಜೆ:- 9

         ದ್ವಿತೀಯ ದರ್ಜೆ :-  3
   
        ಪಾಸ್           :- 6


ಶಾಲೆಯ ಒಟ್ಟು ಫಲಿತಾಂಶ  :-  100

Wednesday, 12 February 2014

ಜನವರಿ ತಿಂಗಳಲ್ಲಿ ಸರ್ವೋದಯ ಮಾಸಾಚರಣೆ ಆಚರಣೆ. ದಿನಾಂಕ 30 ರಂದು  ಸರ್ವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.