Sunday, 31 August 2014


                                             

                                                           68ನೆಯ ಸ್ವಾತಂತ್ರ್ಯ ದಿನಾಚರಣೆ

 

                                  ದಿನಾಂಕ ೧೫ ಆಗಸ್ಟ ೨೦೧೪ ರಂದು ೬೮ನೆಯ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಅಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಶಾಲಾ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ವ ಶಿಕ್ಷಕವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ರಾವ್ ಇವರು ಧ್ವಜಾರೋಹಣ ಮಾಡಿದರು.ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುನಿತಾ ನಾಯಕ್ ಸಹಕರಿಸಿದರು.

                        ತದನಂತರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಚಿಕ್ಕ ಸಮಾರಂಭ ಏರ್ಪಡಿಸಲಾಗಿತ್ತು. ನಲ್ಲೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸುಮತಿ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ದಿವಾಕರ ಶೆಟ್ಟಿ, ಮಾಜಿ ಸೈನಿಕರಾದ ಶ್ರೀ ಶೀನ ಶೆಟ್ಟಿ, ದಾನಿ ಗೋಪಶೆಟ್ಟಿ, S.D.M.C. ಆಧ್ಯಕ್ಷರಾದ ಶ್ರೀ ಗಣೇಶ ರಾವ್ ,ಹಾಗೂ ಸದಸ್ಯರು, ಧರ್ಮಸ್ಥಳ ಸ್ವಸಹಾಯ ಸಂಘದ ಪದಾದಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ನಲ್ಲೂರು ಇವರು ಕೊಡಮಾಡಿದ ಊಟದ ತಟ್ಟೆಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಕಲಾ ಶಿಕ್ಷಕರಾದ ಶ್ರೀ ಪ್ರಶಾಂತ ಜತ್ತನ್ನ, ವಿಧ್ಯಾರ್ಥಿಗಳಾದ ಕುಮಾರಿ ಪೂಜಾಶ್ರೀ, ಕುಮಾರಿ ದೀಕ್ಷಿತಾ, ಕುಮಾರಿ ದೀಪಿಕಾ, ಕುಮರಿ ಶಬರಿ ಸ್ವಾತಂತ್ರ್ಯ ಕುರಿತು ಮಾತ ನಾಡಿದರು. ಶ್ರೀ ಸುರೇಂ ದ್ರ ವಂದಿಸಿದರು. ಶ್ರೀ ಕೃಷ್ಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.









No comments:

Post a Comment