Friday, 29 August 2014


2014-15ನೇ ಸಾಲಿಗಾಗಿ
ರಾಣಿ ಅಬ್ಬಕ್ಕ ಇತಿಹಾಸ ಸಂಘದ ಉದ್ಘಾಟನಾ ಕಾರ್ಯಕ್ರಮ

  
 
                      ದಿನಾಂಕ 14/06/2014 ರಂದು 2014-15 ನೇ ಸಾಲಿಗಾಗಿ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯರಾದ ಶ್ರಿ ಮಹಾಬಲ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮುಖ್ಯೋಪಾದ್ಯಾಯರಾದ ಶ್ರೀ ಭಾಸ್ಕರ ಟಿ. ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ಸುನಿತಾ ನಾಯಕ್ ಉಪಸ್ಥಿತರಿದ್ದರು. ಕುಮಾರಿ ಸವಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
                       ಸಹಶಿಕ್ಷಕರಾದ ಶ್ರೀ ಕೃಷ್ಣ ದೇವಾಡಿಗ ಸರ್ವರನ್ನು ಸ್ವಾಗತಿಸಿದರು. ಶ್ರಿ ಮಹಾಬಲ ಶೆಟ್ಟಿ ಇವರು ದೀಪ ಬೇಳಗಿಸುವುದರ ಮೂಲಕ ಸಂಘಗಳ ಚಟುವಟಿಕೆಗೆ ಚಾಲನೆ ನೀಡಿದರು. ಅತಿಥಿಗಳು ಅವರಿಗೆ ಸಹಕರಿಸಿದರು. ಸಹಶಿಕ್ಷಕರಾದ ಶ್ರೀ ಪ್ರಶಾಂತ ಜತ್ತನ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ರಚನೆ,ಉದ್ದೇಶ ಹಾಗೂ ಕಾರ್ಯಗಳನ್ನು ವಿವರಿಸಿದರು. ಸಹಶಿಕ್ಷಕರಾದ ಶ್ರೀ ಸುರೇಂದ್ರ ಇವರು ಶಾಲಾ ಸಂಸತ್ತಿನ ಸದಸ್ಯರಿಗೆ ಹಾಗೂ ವಿವಿಧ ಸಂಘಗಳ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ರಾಣಿ ಅಬ್ಬಕ್ಕ ಇತಿಹಾಸ ಸಂಘದ ಅಧ್ಯಕ್ಷೆ ಕುಮಾರಿ ಸುಶ್ಮಿತಾ ಪ್ರಮಾಣವಚನ ಸ್ವೀಕರಿಸಿದರು.ಮುಖ್ಯಗುರುಗಳಾದ ಶ್ರೀ ಭಾಸ್ಕರ್ ಟಿ. ಇವರು ಸಂಘಗಳ ಅಗತ್ಯತೆ, ಶಾಲಾ ಸಂಸತ್ತಿನ ಮಹತ್ವ ವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಗಣೇಶ್ ರಾವ್ ಶುಭಹಾರೈಸಿದರು. ಹಿರಿಯ ಸಹಶಿಕ್ಷಕಿ ಶ್ರೀಮತಿ ಸುನಿತಾ ನಾಯಕ್ ವಂದಿಸಿದರು. ಕುಮಾರಿ ಪೂಜಾಶ್ರೀ ವಂದಿಸಿದರು.












 

 




No comments:

Post a Comment